ಬೃಂದಾವನಪತಿ

ಅಂದಿಗು ಪೂತನೆ ಇಂದಿಗು ಪೂತನೆ
ಎಂದೆಂದಿಗೂ ನೀನು ಮಂಗಳನೆ
ಮಂದಮತಿಗೆ ನಿನ್ನ ತಿಳಿಯಲು ಸಾಧ್ಯವೆ?
ಸುಂದಾರ ಸುಗುಣ ದಯಾಕರನೆ

ಒಂದೆಂಬೊ ಅದ್ವೈತ ಮಹಿಮ ನೀನಾದರು
ದ್ವಂದ್ವವ ನಿರ್ಮಿಸಿ ತೋರಿರುವೆ
ಮಂದರೋದ್ಧಾರನೆ ಚೋದ್ಯಮಿದೆಲ್ಲವು
ಬೃಂದಾವನಪತಿ ಗೋವಿಂದನೆ

ಓಹೋಹೊ ಏನಿವು? ಅದ್ಭುತ ಕೃತಿಗಳು
ಲೆಕ್ಕಕೆ ಮೀರಿದ ಭಾವಗಳು
ಆಹಾಹ ನಿನ್ನನು ಬಣ್ಣಿಸಲಳವೇನು?
ಬಹು ಘನವೋ ನಿನ್ನ ಮಹಿಮೆಗಳು

ಕೋಗಿಲೆ ದನಿಯೇನು? ಸಾಗರದಲೆಯೇನು?
ಆಗಸದಾ ಮಹಾಕಾಂತಿಯೇನು?
ರಾಗದ ಸೊಂಪೇನು? ಪಯಿರಿನ ಸೊಗಸೇನು?
ಯೋಗೀಶ ಚಿನ್ಮಯರೂಪ ನೀನು

ವಿಶ್ವದ ಸೊಬಗೇನು? ಜೀವನದಿಡುಗೇನು?
ಸತ್ಯ ಸೌಂದರ್ಯದ ಕಣಿಯೋ ನೀನು
ನಶ್ವರಮಿಲ್ಲದ ಸೃಷ್ಟಿಯ ಕಂಡೆನು
ತಲೆದೂಗಿ ಶಿರಬಾಗಿ ಮಣಿದೆ ನಾನು

ಆನಂದವೆಂಬುದೆ ನೀನೆಂದು ಪರಮ ಸು
ಜ್ಞಾನಿಗಳೆಲ್ಲರು ನುಡಿದಿಹರು
ನಾನೇನು ಬೆಲ್ಲೆನು? ಜನಕಜೆ ನಿನ್ನನು
ತಾನೆ ತಾನಾಗಿಹ ಸ್ವಾಮಿಯನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಫಕೀರಪ್ಪನ ಕತೆ
Next post ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys